-->

ಜೀವನದ ರಹಸ್ಯ , ಕೆಲವು ನುಡಿಗಳು

ನಮ್ಮ ಆತ್ಮೀಯರೊಬ್ಬರು ಕಳುಹಿಸಿದ . ಜೀವನದ ಬಗೆಗಿನ ಕೆಲವು ಮೆಲುಕು ಹಾಕುವಂತ ನುಡಿಗಳು ಮಧ್ಯವಯಸ್ಸಿನ ನಂತರ* *

೧.  ಜೀವನದ ರಹಸ್ಯ

                        ಮಧ್ಯವಯಸ್ಸಿನ ವರೆಗೆ :   ಹೆದರ  ಬೇಡಿ

                        ಮಧ್ಯವಯಸ್ಸಿನ ನಂತರ : ಯಾವುದಕ್ಕೂ ಬೇಸರ ಪಡಬೇಡಿ

೨.  ನೀವು ಸಾಧ್ಯವಾಗುವಷ್ಟು ನಿಮ್ಮ ಜೀವನವನ್ನು ಅನುಭವಿಸಿ

  ೩.   ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾಗುವ ವರೆಗೆ ಮುಂದೂಡಬೇಡಿ, ಎಲ್ಲಿಯವರೆಗೆ ನಿಮ್ಮಿಂದ ಸಾಧ್ಯವೋ ಅಲ್ಲಿಯವರೆಗೆ ಮೊದಲೇ ನೀವು ನೋಡಬೇಕೆಂದಿರುವ ಸ್ಥಳಗಳನ್ನು ಭೇಟಿ ಕೊಡಿ, ನೋಡಿ ಬಿಡಿ.

೪.  ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಹಳೆ ಸ್ನೇಹಿತರು ಗುರು ಹಿರಿಯರು ಇವರುಗಳನ್ನು ಬೇಟಿಯಾಗಿಬಿಡಿ,  ಮುಂದೆ ಅವರೆಲ್ಲರನ್ನು ನೋಡುವ ಅವಕಾಶ ಸಿಗುತ್ತೋ ಇಲ್ಲವೋ.


೫.  ಬ್ಯಾಂಕುಗಳಲ್ಲಿ ಇಟ್ಟ ನಿಮ್ಮ ಹಣ ನಿಮ್ಮದಾಗಿ ಇರದಿರಬಹುದು, ಅದಕ್ಕೇ ಅದನ್ನ ಖರ್ಚು ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಅನುಭವಿಸಿ, ಇದಕ್ಕಾಗಿ ನೀವು ನಾಳೆಯ ಬಗ್ಗೆ ಯೋಚಿಸ ಬೇಕಿಲ್ಲ

೬.  ಏನೆಲ್ಲಾ ತಿನ್ನ ಬೇಕೆನಿಸುತ್ತೋ ತಿಂದು ಬಿಡಿ, ನೀವು  ಖುಷಿ ಯಾಗಿರುವುದು ಮಾತ್ರ ಮುಖ್ಯ ಆದರೆ ನಿಮ್ಮ  ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳನ್ನು ಯಾವಾಗಲೂ ತಿನ್ನಿ, ಅದೇ ನಿಮ್ಮ ಆರೋಗ್ಯಕ್ಕೆ ಹಾನಿಕರವಾದವುಗಳನ್ನು ತಿನ್ನಲೇಬೇಕೆನಿಸಿದಲ್ಲಿ ಒಮ್ಮೊಮ್ಮೆ ಮಾತ್ರ ಸ್ವಲ್ಪ  ಸ್ವಲ್ಪವೇ ತಿನ್ನಿ.

೭.  ಅನಾರೋಗ್ಯವನ್ನು ಸರಿಯಾದ ರೀತಿಯಲ್ಲೇ ಕ್ರಮಿಸಿ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಪ್ರತಿಯೊಬ್ಬರೂ ಹುಟ್ಟು, ವಯಸ್ಸು, ಅನಾರೋಗ್ಯ, ಮತ್ತು ಸಾವು ಈ ಚಕ್ರದಲ್ಲೇ ಸುತ್ತಬೇಕು. ಇದಕ್ಕೆ ಶಾಶ್ವತವಾದ   ಪರಿಹಾರ ಎಂದೂ ಇಲ್ಲವೇ ಇಲ್ಲ. ಇದೇ ಜೀವನ.

೮.  ನೀವು ಅನಾರೋಗ್ಯವಾಗಿರುವಾಗ ಹೆದರುವುದೂ ಬೇಡ, ಬೇಸರವೂ ಬೇಡ. ನಿಮ್ಮದೇನಾದರೂ ಬಾಕಿ/ ನೀವು ಪರಿಹರಿಸಬೇಕಾದ /ಇತ್ಯರ್ಥವಾಗಬೇಕಾದ ಸಮಸ್ಯೆ ಇದ್ದರೆ ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಮತ್ತು ನಿರಾಳರಾಗಿ.

೯.  ನಿಮ್ಮ ದೇಹವನ್ನು ವೈದ್ಯರೂ, ಜೀವನವನ್ನು ದೇವರೂ/ ಪ್ರಕೃತಿಯೂ ಮತ್ತು ನಿಮ್ಮ ಮನಸ್ಥಿತಿಯನ್ನು ನೀವೂ ನೋಡುತ್ತಿರಿ.

೧೦.  ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ, ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ, ಮತ್ತು  ಸಂತೋಷಗಳಿಗೆ  ಚಿಂತೆಗಳನ್ನು ಬದಲಿಸ ಬಹು ದಾದರೆ ಹಾಗೇ ಮಾಡಿ .

೧೧. ಮಕ್ಕಳು ಅವರ ಭವಿಷ್ಯವನ್ನು ಖುದ್ದು ಮಾಡಿಕೊಳ್ಳುತ್ತಾರೆ. ಅವರ ಬಗ್ಗೆ ನೀವು ಜಾಸ್ತಿ ಚಿಂತಿಸುವದು ಬೇಡ

೧೨.  ಹಳೆಯ ನಾಲ್ಕು ಖಜಾನೆಯನ್ನು ಸರಿಯಾಗಿ ನೋಡಿಕೊಳ್ಳಿ  
             ೧.   ನಿಮ್ಮ ಹಳೆಯ ದೇಹ : ನಿಮ್ಮ ಆರೋಗ್ಯ ಮತ್ತು ದೇಹಸ್ಥಿತಿಯ ಬಗೆಗೆ ಜಾಸ್ತಿ  ಕಾಳಜಿ    ನಿಮ್ಮದೇ ಇರಲಿ
          ೨.     ನಿಮ್ಮ  ಆರ್ಜಿತ  ಧನ ನಿಮ್ಮ  ಕೈಯಲ್ಲೇ ಇಟ್ಟುಕೊಳ್ಳುವುದು  ಅತ್ಯಂತ ಒಳ್ಳೆಯದು.
          ೩.     ನಿಮ್ಮ ಹಳೆಯ ಸಂಗಾತಿ ಅತ್ಯಂತ ಅಮೂಲ್ಯ ಖಜಾನೆಯಿದು, ಪ್ರತಿ ಕ್ಷಣವೂ ಅನ್ಯೋನ್ಯವಾಗಿ ಸಹಚರರಂತೆ ಬಾಳಲು ಪ್ರಯತ್ನ ಪಡಿ , ನಿಮ್ಮಿಬ್ಬರಲ್ಲಿ ಒಬ್ಬರು ಮೊದಲು ಕೈ ಬಿಡುವಿರಿ ( ಈ ಜಗದಿಂದ)
         ೪.     ನಿಮ್ಮ ಹಳೆಯ ಸ್ನೇಹಿತರು:  ಇವರನ್ನು ಸಿಗಲು ಸಾಧ್ಯವಾಗುವ ಪ್ರತಿ ಕ್ಷಣಗಳನ್ನೂ ಸಿಕ್ಕಿ ಅಸ್ವಾದಿಸಿ, ಏಕೆಂದರೆ ಕಳೆಯುತ್ತಿರುವ ಪ್ರತಿ ಕ್ಷಣಗಳೂ ನಿಮಗೆ ಅಮೂಲ್ಯವಾಗಿ ಕಡಿಮೆಯಾಗುತ್ತಲಿರುತ್ತದೆ.

 13. ದಿನಾ ನೀವು ಅವಶ್ಯ  ಮಾಡಲೇಬೇಕಾದ ಮುಖ್ಯ ಎರಡು ಕೆಲಸಗಳು  " ಹಸನ್ಮುಖಿಯಾಗಿ  ಮತ್ತು ನಗುತ್ತಿರಿ

14. ಹರಿಯುತ್ತಿರುವ ನೀರು ಹಿಂದಕ್ಕೆ ತಿರುಗದು,ಅಂತೆಯೇ ನಮ್ಮ ಜೀವನ, ಅದಕ್ಕೇ ಸಂತಸವಾಗಿಸಿರಿ.

15. ದೇವರು ನಿಮ್ಮ ಚೆನ್ನಾಗಿ ಖುಷಿಯಲ್ಲಿಟ್ಟಿರಲಿ.

ಈ ವಿಷಯಗಳನ್ನು ಸಾಧ್ಯವಾದಷ್ಟೂ ಬೇಕಾದವರೊಡನೆ ಹಂಚಿಕೊಳ್ಳುತ್ತಿರಿ.

*********

🌸ಇದು ಕಟು-ಕಹಿ ಸತ್ಯ🌸 :-

🌸 ಗೆಜ್ಜೆಯ ಬೆಲೆ ಸಾವಿರ ಸಾವಿರ ಹಾಕುವುದು ಕಾಲಿನಲ್ಲಿ ...
ಕುಂಕುಮದ ಬೆಲೆ ಪೈಸೆಯಲ್ಲಿ ಆದರೆ ಹಚ್ಚುವದು ಹಣೆಯಲ್ಲಿ ...
🌸💰 ಬೆಲೆ ಮುಖ್ಯವಲ್ಲ ..     🔴ಇಲ್ಲಿ ಕೃತಿ ಮುಖ್ಯ ...

🌸 ಉಪ್ಪಿನಂತೆ ಕಟುಮಾತನು  ಹೇಳುವವನು ನಿಜ ಸ್ನೇಹಿತ ...
ಸಕ್ಕರೆಯಂತೆ ಸಿಹಿ ಮಾತಾಡುವ ನಯ ವಂಚಕ....
🌸 ಅದಕ್ಕೇ ಉಪ್ಪಿನಲ್ಲಿ ಹುಳುಬಿದ್ದ ಇತಿಹಾಸವಿಲ್ಲಾ ....
ಇತಿಹಾಸದಲ್ಲಿ ಹುಳು ಬೀಳದ ಸಿಹಿಯಿಲ್ಲ...

🌸 ಈ..ಮಂದಿರ - ಮಸೀಧಿಗಳು
ಬಹಳ ವಿಸ್ಮಯ ....
ಇಲ್ಲಿ ಭಿಕ್ಷುಕ ಹೊರಗೆ ಭಿಕ್ಷೆ ಬೇಡುತಾನೆ...
ಶ್ರೀಮಂತ ಒಳಗೆ ಭಿಕ್ಷೆ ಬೇಡುತಾನೇ....
ಶ್ರೀಮಂತ ಒಳಗೆ ಭಿಕ್ಷೆ ಬೇಡುತಾನೇ....

🌸 ಕಾಣದ ದೇವರಿಗೆ ಹಾಲು ಖರ್ಜೂರ ನೈವೇದ್ಯಾ ....
ಹಸಿದ ಬಡವನಿಗೆ ಒಣ ರೊಟ್ಟಿ ಹಳಸಿದ ಅನ್ನಾ ಇದು ಎಂತಾ ವಿದ್ಯಾ....
🌸 ಏ ಮಾನವಾ ಈ ಜೀವನವು ಆಷ್ಟೊಂದು ಒಳ್ಳೆಯದೇನಲ್ಲ ....

*********

ಇನ್ನೊಬ್ಬರ ಸಂತೋಷದಲ್ಲಿ ಭಾಗಿಯಾಗಬೇಡ. ಆದರೆ....
ಆ... ಸಂತೋಷಕ್ಕೆ  ಕಾರಣ      ನೀನಾಗಿರು.
ಇನ್ನೊಬ್ಬರ ದ್ಹುಖದಲ್ಲಿ ಬಾಗಿಯಾಗು.
ಆ...ದ್ಹುಖಕ್ಕೆ ನೀನು ಕಾರಣವಾಗಬೇಡ

*********

ಇನ್ನು ಸ್ವಲ್ಪ ದೂರ ಮಾತ್ರ "*

*ಒಂದು ರಶ್ ಆಗಿದ್ದ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬಳ ಹತ್ತಿರ ಕೈ ತುಂಬಾ ಬ್ಯಾಗುಗಳೊಂದಿಗೆ ವೃದ್ಧೆಯೊಬ್ಬಳು ಬಂದು ಕುಳಿತರು. ಆಕೆಯ ಬ್ಯಾಗುಗಳಿಂದಾಗಿ ಆ ಯುವತಿಗೆ ಕುಳಿತುಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು. ಆ ಯುವತಿಯ ಅವಸ್ಥೆಯನ್ನು ನೋಡಿದ ಪಕ್ಕದಲ್ಲಿ ನಿಂತಿದ್ದ ಒಬ್ಬಾತ ಆ ಯುವತಿಯತ್ರ ಕೇಳಿದ - ನೀವು ಯಾಕೆ ಪ್ರತಿಕ್ರಿಯುಸುತ್ತಿಲ್ಲ? ಆ ವೃದ್ಧೆಯತ್ರ ಬ್ಯಾಗುಗಳನ್ನು ಕೆಳಗಿಡಲು ಯಾಕೆ ಹೇಳುತ್ತಿಲ್ಲ?*

*ಆಗ ಆಕೆ ಮುಗುಳ್ನಗುತ್ತಾ ಹೇಳುತ್ತಾಳೆ - ಇಷ್ಟು ಚಿಕ್ಕ ವಿಷಯಕ್ಕೆ ನಾನು ಯಾಕೆ ಪ್ರಾಧಾನ್ಯತೆ ಕೊಡಬೇಕು?* *ಆಕೆಯ ಜೊತೆ  ಚರ್ಚಿಸಬೇಕು, ನಂತರ ಜಗಳ, ನಂತರ ಕೋಪ , ಆಮೇಲೆ ದ್ವೇಷ ಹುಟ್ಟಿಕೊಳ್ಳುತ್ತದೆ. ಕೊನೆಗೆ ತಾಳ್ಮೆಯೇ ಕಳಕೊಳ್ಳುತ್ತದೆ. ನಾನು ನೆಕ್ಸ್ಟ್ ಸ್ಟಾಪಲ್ಲಿ ಇಳಿಯುತ್ತೇನೆ. ನಾವು ಒಟ್ಟಿಗೆ ಸಾಗುವ ಈ ಪ್ರಯಾಣವು*
*" ಇನ್ನು ಸ್ವಲ್ಪ ದೂರ ಮಾತ್ರ " .....*

*ನಿಜವಾಗಿಯೂ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ಒಂದು ದೊಡ್ಡ ಸಂದೇಶವನ್ನೇ ಆ ಯುವತಿ ಹೇಳಿರುವುದು.....!!*

*ನಾವು ಒಟ್ಟಿಗಿನ ಈ ಪ್ರಯಾಣವು " ಇನ್ನು ಸ್ವಲ್ಪ ದೂರ ಮಾತ್ರ " ಆದ್ದರಿಂದ ಒಂದು ತರ್ಕ ಅಥವಾ ಚರ್ಚೆಯ ಮತ್ತು ಒಂದು ಜಗಳದ ಅವಶ್ಯಕತೆ ಏನಿದೆ ಸ್ನೇಹಿತರೆ ?*

*ನಮ್ಮೆಲ್ಲರ ಈ ಜೀವನ ಎಷ್ಟೊಂದು ನಶ್ವರ ಮತ್ತು ಚಿಕ್ಕದಾಗಿದೆ....? ಜಗಳಗಳಿಂದಲೋ, ಅನಾವಶ್ಯಕವಾದ ತರ್ಕಗಳಿಂದಲೋ, ಧ್ವೇಷಗಳಿಂದಲೋ, ಯಾರನ್ನೂ ಕ್ಷಮಿಸದೆ ಇರುವುದರಿಂದಲೋ ನಮ್ಮ ಬದುಕ್ಕನ್ನು ಇರುಳಾಗಿಸುವುದಕ್ಕಲ್ಲ ನಮ್ಮ ಜೀವನ.*

*ನಿಮ್ಮ ಹೃದಯವನ್ನು ಯಾರಾದರೂ ನೋಯಿಸಿದ್ದಾರಾ?ಅವರನ್ನು ಕ್ಷಮಿಸಿ. ಯಾಕೆಂದರೆ- ಒಟ್ಟಿಗಿನ ಈ ಪ್ರಯಾಣ  ಇನ್ನು ಸ್ವಲ್ಪ ದೂರ ಮಾತ್ರ.*

*ನಿಮ್ಮನ್ನು ಯಾರಾದರೂ ಅವಮಾನಿಸಿದರೇ? , ನಿಮ್ಮನ್ನು ಯಾರಾದರೂ ಮೋಸ ಮಾಡಿದರೇ?  ನಿಂದಿಸಿದರೇ?ಬೇಜಾರ್ ಮಾಡ್ಕೋಬೇಡಿ ಈ ಒಟ್ಟಿಗಿನ ಜೀವನಯಾತ್ರೆಯು ಇನ್ನು ಸ್ವಲ್ಪ ದೂರ ಮಾತ್ರ ಅಂತ ನೆನೆದುಕೊಂಡರೆ ಸಾಕು.*

*ನಿಮ್ಮ ಹತ್ತಿರದ ಸ್ನೇಹಿತರು ಅಥವಾ ಸಂಬಂಧಿಕರಿಂದ ನೀವು ಶಿಕ್ಷಿಸಲ್ಪಟ್ಟರೆ, ಚಿಂತಿಸಬೇಡಿ . ಅವರೊಟ್ಟಿಗಿನ ಈ ಜೀವನದ ಪಯಣವು ಇನ್ನು ಸ್ವಲ್ಪ ದೂರ ಮಾತ್ರ.*

*ಮನಸಲ್ಲಿ ಪ್ರೀತಿ, ಸ್ನೇಹ, ಮಾಧುರ್ಯವನ್ನು ತುಂಬಿಕೊಳ್ಳಿ. ಅವು ನಿಮಗೆ ಒಂದು ಅನುಗ್ರಹವಾಗಿವೆ. ಶತ್ರುಗಳಿಗೋ ಅಥವಾ ಧ್ವೇಷಿಸುವವರಿಗೋ ಸಿಗದ ಒಂದಾಗಿದೆ ಅವು.*

*ಆದ್ದರಿಂದ ಇನ್ನುಳಿದ ಕಾಲ ಸಂತೋಷದಿಂದಲೂ, ಸ್ನೇಹದಿಂದಲೂ ಪರೋಪಕಾರದಿಂದಲೂ ಪರಸ್ಪರ ಕ್ಷಮಿಸುತ್ತಾ, ಸಹಿಸುತ್ತಾ  ಮುಂದೆ ಸಾಗೋಣ.*

*ಹಿಂತಿರುಗಲಾಗದ , ಯಾವಾಗ ಯಾರು ಯಾವ ಸ್ಟಾಪಲ್ಲಿ ಇಳಿಯುವರು ಎಂದು ಮುಂಚೆನೇ ಹೇಳಲಾಗದ ಈ ಪ್ರಯಾಣವು  " ಇನ್ನು ಸ್ವಲ್ಪ ದೂರ ಮಾತ್ರ "-*


**********

ಒಬ್ಬ ಮರದ ಕೆಲಸದವನು ರಾತ್ರಿ ತನ್ನ ಕೆಲಸವನ್ನು ಮುಗಿಸಿ ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುತ್ತಾನೆ. ಆ ಹೊತ್ತಿನಲ್ಲಿ ಒಂದು ದೊಡ್ಡ ಹಾವೊಂದು ಅಂಗಡಿಗೆ ನುಗ್ಗುತ್ತದೆ. ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದೆಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ ತಿರುಗುತ್ತಿರುವಾಗ,  ಅಲ್ಲಿರುವ ಎರಡು ಬದಿಯಲ್ಲಿಯೂ ಹರಿತವಾಗಿರುವ ಒಂದು ಗರಗಸಕ್ಕೆ ತಾಗಿ ಅದಕ್ಕೆ ಸಣ್ಣದಾದ ಗಾಯವಾಗುತ್ತದೆ. ಹಾವಿಗೆ ಸಿಟ್ಟು ಬಂದು ಆ ಗರಗಸಕ್ಕೆ ಕಚ್ಚುತ್ತದೆ. ಆಗ ಅದರ ಬಾಯಿಗೆ  ಕೂಡ ಗಾಯವಾಗುತ್ತದೆ. ಇದರಿಂದ ಹಾವಿನ ಸಿಟ್ಟು ಮತ್ತಷ್ಟು ಹೆಚ್ಚಾಗುತ್ತದೆ. ಕೂಡಲೇ ಅದು ಆ ಗರಗಸಕ್ಕೆ ಗಟ್ಟಿಯಾಗಿ ಸುತ್ತಿಕೊಂಡು ತನ್ನ ಹಿಡಿತವನ್ನು ಬಲಪಡಿಸುತ್ತದೆ. ಮರುದಿನ ಬೆಳಿಗ್ಗೆ ಮರದ ಕೆಲಸದವನು ತನ್ನ ಅಂಗಡಿಯನ್ನು ತೆರೆದಾಗ ಅವನಿಗೆ ಗರಗಸದಲ್ಲಿ ಸುತ್ತಿಕೊಂಡು ಸತ್ತಿದ್ದ ಹಾವು ಕಾಣುತ್ತದೆ.
ಆದರೆ ಹಾವು ಬೇರೆಯವರ ಆಕ್ರಮಣದಿಂದ ಸಾಯಲಿಲ್ಲ, ಬದಲಿಗೆ ತನ್ನದೇ ಆದ ಸಿಟ್ಟು ಮತ್ತು ಹಠದಿಂದ ಸತ್ತಿತ್ತು.
ನಮಗೆ ಕೂಡ ಸಿಟ್ಟು ಬಂದಾಗ ನಾವು ಸಹಿತ ಆ ಹಾವಿನ ಹಾಗೆ, ಸಿಟ್ಟು ಮತ್ತು ಹಗೆಯಿಂದ ಎದುರಾಳಿಗೆ ನಷ್ಟ ಮಾಡಲು ಪ್ರಯತ್ನ ಪಡುತ್ತೇವೆ. ಆದರೆ ಸ್ವಲ್ಪ ಸಮಯದ ನಂತರ ಅದರಿಂದಾಗಿ ನಮಗೆ ಹೆಚ್ಚು ಹಾನಿಯಾದದ್ದು ಗಮನಕ್ಕೆ ಬರುತ್ತದೆ.
ನಾವು ಸಂತೋಷದಿಂದ ಜೀವಿಸಲು ಕೆಲವೊಂದು ವಸ್ತು, ಜನರು, ಘಟನೆ ಹಾಗು ವಿಷಯಗಳನ್ನು ಕಡೆಗಣಿಸಬೇಕಾಗುತ್ತದೆ.
ನಾವು ಪ್ರತಿಕ್ರಿಯೆ ತೋರಿಸುವ ಅಗತ್ಯತೆ ಇದ್ದಲ್ಲಿ ಮಾತ್ರ ಪ್ರತಿಕ್ರಿಯೆ ತೋರಿಸಬೇಕೆ ವಿನಹ ಎಲ್ಲದಕ್ಕೂ ಪ್ರತಿಕ್ರಿಯೆ ತೋರಿಸಲು ಹೋದಲ್ಲಿ ಅನವಶ್ಯಕವಾಗಿ ನಾವು ಹಾನಿಗೊಳಬೇಕಾಗುವ ಪ್ರಸಂಗವೂ ಬರಬಹುದು.


**********
–>